ನೀ ಬಾರದೇ

ನೀ ಬಾರದೇ
ಮನವು ಕಾಡಿದೇ
ಬರಡಾದ ಜೀವಕೆ
ಬಯಕೆಗಳೂ ಮೂಡದೇ ||

ಪ್ರೀತಿಯ ಅರಿಯೆ ಎಂದೂ
ಪ್ರಿಯತಮನೇ ನೀನೇ ಎಂದು
ಬಯಸಿ ಬಂದೆ ರಾಧೆ ನಾನು
ಕೈ ಹಿಡಿದು ನಡೆಸುವಾತ ನೀನೇ ಎಂದೂ ||

ನನ್ನಲ್ಲಿ ನಿನ್ನ ನಿಲುವಿರಲು
ನಿನ್ನಲ್ಲಿ ನನ್ನ ಒಲವಿರಲು
ಮನವೆಂಬ ಹಕ್ಕಿ ಹಾಡೆ
ಕುಣಿ ಕುಣಿದು ನಾನು ದಣಿದೆ ||

ಹಾದಿ ಬೀದಿಯಲಿ
ಕೃಷ್ಣಾ ನಿನ್ನ ಸಖಿಯರಲ್ಲಿ
ವಿರಹವ ತೋಡಿಕೊಂಡೆ
ಯಾರು ಹೇಳುವರಿಲ್ಲ ಕೇಳುವರಿಲ್ಲ ||

ರಾಧೆನಾ ಕೃಷ್ಣ ನಿನ್ನ ಮೊರೆ
ಹೋಗಲು ಬಿಗುಮಾನವೇಕೊ
ಪ್ರೀತಿಯ ಕರೆಗೆ ಪ್ರೇಮಾಗ್ನಿಯಲಿ
ಬೆಂದ ಬೂದಿಯನು ತಿಲಕವಾಗಿರಿಸಿದೇ ಕೃಷ್ಣಾ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಡುಗಡೆ
Next post ಕಳ್ಳ ಮತ್ತು ಸೇವಕ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys